"Agriculture is our CULTURE"

PM kisan Central ID List :: ಜಿಲ್ಲೆ, ತಾಲೂಕು, ಹೋಬಳಿ ನಮೂದಿಸಿ? ಸೆಂಟ್ರಲ್ ಐಡಿ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ ಮಾತ್ರ 2000 ರೂ ಹಣ!!!

ನಿಮ್ಮ ಖಾತೆಗೆ 2,000 ರೂ. ಬರಲಿದೆಯೇ? ಪಿಎಂ-ಕಿಸಾನ್ ಸ್ಟೇಟಸ್ ಹೀಗೆ ಚೆಕ್ ಮಾಡಿ!

Will You Get ₹2,000? Check Your PM-Kisan Status Now!

ಪಿಎಂ ಕಿಸಾನ್ ಸಮ್ಮಾನ್ ನಿಧಿ (PM Kisan) ಕಾರ್ಯಕ್ರಮದ 22ನೇ ಕಂತಿನ ಹಣವನ್ನು ಪಡೆದುಕೊಳ್ಳಲು ನಿಮ್ಮ ಅರ್ಜಿಯ ಪ್ರಸ್ತುತ ಸ್ಥಿತಿಯನ್ನು (Status) ನಿಮ್ಮ ಮೊಬೈಲ್ ಫೋನಿನಲ್ಲಿ ಹೇಗೆ ಪರಿಶೀಲಿಸಬೇಕು ಎಂಬುದರ ಬಗ್ಗೆ ::

ಅರ್ಜಿಯ ಸ್ಥಿತಿಯನ್ನು ತಿಳಿಯುವ ವಿಧಾನ:-

How to know the application status:-

1. ಪಿಎಂ ಕಿಸಾನ್ ಅಧಿಕೃತ ಜಾಲತಾಣದಲ್ಲಿ ‘ನಿಮ್ಮ ಸ್ಥಿತಿಯನ್ನು ತಿಳಿಯಿರಿ’ (Know Your Status) ಆಯ್ಕೆಯ ಮೂಲಕ ಪರಿಶೀಲಿಸಲು ಒಟಿಪಿ (OTP) ತಾಂತ್ರಿಕ ಸಮಸ್ಯೆ ಉಂಟಾಗುತ್ತಿದೆ. ಆದ್ದರಿಂದ, ಬೇರೆ ಮಾರ್ಗವನ್ನು ಅನುಸರಿಸಲು ಸೂಚಿಸಲಾಗಿದೆ.

2. ಫ್ರೂಟ್ಸ್ (FRUITS) ತಂತ್ರಾಂಶದ ಬಳಕೆ,ಗೂಗಲ್‌ನಲ್ಲಿ “Fruits PM Kisan” ಎಂದು ಹುಡುಕಿ , ಕರ್ನಾಟಕ ಸರ್ಕಾರದ ಫ್ರೂಟ್ಸ್ ಜಾಲತಾಣಕ್ಕೆ ಭೇಟಿ ನೀಡಿ.

PMK ID ಯನ್ನು ಪಡೆದುಕೊಳ್ಳುವುದು:

Hiw to get PMK ID?

* ಜಾಲತಾಣದಲ್ಲಿ ‘ವರದಿಗಳು’ (Reports) ಎಂಬ ಆಯ್ಕೆಯನ್ನು ಆರಿಸಿ, ನಂತರ ‘ಘೋಷಿತ ರೈತರ ಪಟ್ಟಿ’ ಎಂಬುದನ್ನು ಕ್ಲಿಕ್ ಮಾಡಿ.

Click On ವರದಿಗಳು

 ವರದಿಗಳು/ Reports

Click On ಘೋಷಿತರ ರೈತರ ಪಟ್ಟಿ

ಘೋಷಿತ ರೈತರ ಪಟ್ಟಿ

* ನಿಮ್ಮ ಜಿಲ್ಲೆ, ತಾಲೂಕು, ಹೋಬಳಿ ಮತ್ತು ಗ್ರಾಮವನ್ನು ಕ್ರಮವಾಗಿ ಆಯ್ಕೆ ಮಾಡಿ ‘ವೀಕ್ಷಿಸಿ‘ ಬಟನ್ ಅನ್ನು ಕ್ಲಿಕ್ ಮಾಡಿದರೆ, ನಿಮ್ಮ ಗ್ರಾಮದ ರೈತರ ಪಟ್ಟಿಯು ಅವರ PMK ID ಯೊಂದಿಗೆ ಕಾಣಿಸುತ್ತದೆ. ಅದನ್ನು ನಕಲು (copy) ಮಾಡಿಕೊಳ್ಳಿ.

Enter District, Taluk and Hobli

ಜಿಲ್ಲೆ, ತಾಲೂಕು, ಹೋಬಳಿ ಮತ್ತು ಗ್ರಾಮದ ಮಾಹಿತಿ 

Check Status

ಗ್ರಾಮದ ರೈತರ ಪಟ್ಟಿ

4. ಸ್ಥಿತಿಯ ಅವಲೋಕನ:

• ಪುನಃ ‘ಸ್ಥಿತಿ ಪರಿಶೀಲಿಸಿ’ (Check Status) ವಿಭಾಗಕ್ಕೆ ಹೋಗಿ ‘ಅರ್ಜಿಯ ಸ್ಥಿತಿಯನ್ನು ವೀಕ್ಷಿಸಿ’ ಆಯ್ಕೆಯನ್ನು ಕ್ಲಿಕ್ ಮಾಡಿ.

* ಅಲ್ಲಿ ನಿಮ್ಮ PMK ID ಯನ್ನು ನಮೂದಿಸಿ ಹುಡುಕಾಟ ನಡೆಸಿದರೆ, ನಿಮ್ಮ ಅರ್ಜಿಯ ಸಂಪೂರ್ಣ ವಿವರಗಳು ಲಭ್ಯವಾಗುತ್ತವೆ.

ಯಾರಿಗೆ ಹಣ ದೊರೆಯುತ್ತದೆ?

Status – Approved,ನಿಮ್ಮ ಅರ್ಜಿಯ ಪಕ್ಕದಲ್ಲಿ ‘Approved’ ಎಂದು ನಮೂದಿಸಿರಬೇಕು.

* YES/NO ಪರಿಶೀಲನೆ, ಅರ್ಜಿಯ ವಿವರಗಳ ಪಕ್ಕದಲ್ಲಿ “SS” ಅಥವಾ “YES” ಎಂದು ನಮೂದಿಸಿದ್ದರೆ, ನಿಮ್ಮ ಅರ್ಜಿಯನ್ನು ಪಿಎಂ ಕಿಸಾನ್ ತಂತ್ರಾಂಶಕ್ಕೆ ಯಶಸ್ವಿಯಾಗಿ ರವಾನಿಸಲಾಗಿದೆ ಮತ್ತು ನಿಮಗೆ 22ನೇ ಕಂತಿನ 2000 ರೂ. ಹಣವು ಖಂಡಿತವಾಗಿ ಬರುತ್ತದೆ.

* ಹಣ ಬಾರದಿರಲು ಕಾರಣಗಳು:

• ಒಂದು ವೇಳೆ ಅಲ್ಲಿ “NO” ಎಂದು ನಮೂದಿಸಿದ್ದರೆ ಅಥವಾ ‘Rejected’ ಎಂದು ತೋರಿಸುತ್ತಿದ್ದರೆ, ನಿಮಗೆ ಹಣ ಬರುವುದಿಲ್ಲ.

* ಇ-ಕೆವೈಸಿ (e-KYC) ಮಾಡಿಸದಿದ್ದಲ್ಲಿ, ಆಧಾರ್ ಕಾರ್ಡ್ ಅನ್ನು ಜೋಡಣೆ ಮಾಡದಿದ್ದಲ್ಲಿ ಅಥವಾ ಒಂದೇ ರೇಷನ್ ಕಾರ್ಡಿನಲ್ಲಿರುವ ಇಬ್ಬರು ಸದಸ್ಯರು ಅರ್ಜಿ ಸಲ್ಲಿಸಿದರೆ ಅಂತಹ ಅರ್ಜಿಗಳನ್ನು ತಿರಸ್ಕರಿಸುವ ಸಾಧ್ಯತೆ ಇರುತ್ತದೆ.

22ನೇ ಕಂತಿನ ಹಣವು ಶೀಘ್ರದಲ್ಲಿಯೇ ರೈತರ ಖಾತೆಗಳಿಗೆ ಜಮಾ ಆಗಲಿದ್ದು, ಪ್ರತಿಯೊಬ್ಬ ರೈತರು ತಕ್ಷಣವೇ ತಮ್ಮ ಅರ್ಜಿಯ ಸ್ಥಿತಿಯನ್ನು ತಿಳಿಯಬಹುದು 

ಪಿಎಂ-ಕಿಸಾನ್ ಯೋಜನೆ:

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಒಂದು ಕೇಂದ್ರ ವಲಯದ ಯೋಜನೆಯಾಗಿದೆ. ಈ ಯೋಜನೆಯಡಿಯಲ್ಲಿ, ದೇಶದ ಎಲ್ಲಾ ರೈತ ಕುಟುಂಬಗಳಿಗೆ ವಾರ್ಷಿಕವಾಗಿ 6,000 ರೂಪಾಯಿಗಳನ್ನು ತಲಾ 2,000 ರೂಪಾಯಿಗಳಂತೆ ಮೂರು ಸಮಾನ ಕಂತುಗಳಲ್ಲಿ ನೇರ ನಗದು ವರ್ಗಾವಣೆ (Direct Benefit Transfer – DBT)

 ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮಾ ಮಾಡಲಾಗುತ್ತದೆ. ಆರಂಭದಲ್ಲಿ, ಈ ಯೋಜನೆಯು ಸಣ್ಣ ಮತ್ತು ಅತಿಸಣ್ಣ ರೈತರಿಗೆ ಮಾತ್ರ ಸೀಮಿತವಾಗಿತ್ತು, ಆದರೆ ನಂತರ ಇದನ್ನು ದೇಶದಲ್ಲಿ ಭೂಮಿ ಹೊಂದಿರುವ ಎಲ್ಲಾ ರೈತ ಕುಟುಂಬಗಳಿಗೂ ವಿಸ್ತರಿಸಲಾಗಿದೆ. 

ರೈತರು ವಿವಿಧ ಸರ್ಕಾರಿ ಯೋಜನೆಗಳ ಲಾಭ ಪಡೆಯಲು ಅನುಕೂಲವಾಗುವಂತೆ, ಕರ್ನಾಟಕ ಸರ್ಕಾರವು ಫಾರ್ಮರ್ ರಿಜಿಸ್ಟ್ರೇಷನ್ ಮತ್ತು ಯುನಿಫೈಡ್ ಬೆನಿಫಿಶಿಯರಿ ಇನ್ಫಾರ್ಮೇಷನ್ ಸಿಸ್ಟಮ್ (Farmer Registration and Unified Beneficiary Information System) ಎಂಬ ತಂತ್ರಾಂಶವನ್ನು ಅಭಿವೃದ್ಧಿಪಡಿಸಿದೆ.

ಈ ತಂತ್ರಾಂಶವು ರೈತರ ಭೂಮಿಗೆ ಸಂಬಂಧಿಸಿದ ವಿವರಗಳು ಮತ್ತು ಇತರ ಅಗತ್ಯ ಮಾಹಿತಿಗಳನ್ನು ಒಂದೇ ಕಡೆ ಸಂಗ್ರಹಿಸುತ್ತದೆ. ಈ ಮಾಹಿತಿಯು ರೈತರಿಗೆ ಮಧ್ಯವರ್ತಿಗಳ ಸಹಾಯವಿಲ್ಲದೆ ನೇರವಾಗಿ ತಮ್ಮ ಸೌಲಭ್ಯಗಳ ಬಗ್ಗೆ ತಿಳಿದುಕೊಳ್ಳಲು ಮತ್ತು ಆರ್ಥಿಕವಾಗಿ ಭದ್ರತೆಯನ್ನು ಹೊಂದಲು ಸಹಾಯ ಮಾಡುತ್ತದೆ.

The Pradhan Mantri Kisan Samman Nidhi (PM-KISAN) is a national program to financially support all farmer families in India who own land.

It gives ₹6,000 per year to each family, split into three payments of ₹2,000. This money is directly deposited into their bank accounts through Direct Benefit Transfer (DBT).

At first, the program was only for small farmers, but now it includes all farmers who own land, except for some high-income earners.

To make sure farmers get these benefits easily, the Karnataka government created the FRUITS (Farmer Registration and Unified Beneficiary Information System) portal.

This system keeps all farmer land and personal information in one place. This helps them get access to different government programs without needing to go through other people.

These online tools let farmers easily check their application status and if they are eligible. This helps them get what they are entitled to on their own, improving their economic safety and financial well-being.

Thank you.

ಧನ್ಯವಾದಗಳು

<<< ಅ ಡಿಕೆ ಮಾರುಕಟ್ಟೆ : ಇಂದಿನ ಅ ಡಿಕೆ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

< ದಿನನಿತ್ಯ ಅ ಡಿಕೆ ಮಾರುಕಟ್ಟೆಯ ದರವನ್ನು, ಅ ಡಿಕೆ ರೋಗ , ಅ ಡಿಕೆಗೆ ಗೊಬ್ಬರ ಸಿಂಪರಣೆ, ಅ ಡಿಕೆಯ ಸಂಪೂರ್ಣ ಮಾಹಿತಿ ಕೆಳಗಿನ ಫೇಸ್ಬುಕ್ , ವಾಟ್ಸಪ್ ಮತ್ತು ಟ್ವಿಟರ್ ಗುಂಪು ಜೈನ್ ಆಗಿ >

1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

ನಿಮಗೆ ಯಾವ ಜಿಲ್ಲೆಯಲ್ಲಿ ಯಾವ ದಿನ ಎಷ್ಟು ಅ ಡಿಕೆ ಬಂದಿದೆ ಗರಿಷ್ಠ ದರವನ್ನು ನೋಡಬಹುದು.ಯಾವ ವೆರೈಟಿಯ ದರವನ್ನು ನೀವು ನೋಡಬಹುದು.

ಹೊಸ ಅ ಡಿಕೆ, ಹಳೆಯ ಅ ಡಿಕೆ ರಾಶಿ ಇಪ್ಪಿ ​​ಬೆಟ್ಟಿ ಕೆಂಪುಗೋಟು ಚಿಪ್ಪು,ಹಳೆಯ ಚಾಲಿ, ಹೊಸ ಚಾಲಿ ಬಿಳಿಗೋಟು, ಸಿಪ್ಪೆಗೋಟು, ಸರಕು, ಬೆಟ್ಟಿ.

ರೈತರಿಗೆ ಯಾವ ಅ ಡಿಕೆ ವೆರೈಟಿಯ ಬೆಲೆ ಹೇಗಿದೆ ಎಂಬುದು ತಿಳಿಸಿಕೊಡಲು ಎಲ್ಲಾ ವೆರೈಟಿ ಅ ಡಿಕೆ ದರವನ್ನು ತಿಳಿಸಲಾಗಿದೆ. 

ರೈತರ ಸೇವೆಯಲ್ಲಿ ನಿಮ್ಮ vkgrowmore.com 💚

  V K

 ಪರಿಸದೊಂದಿಗೆ ಆರ್ಥಿಕತೆ


"Agriculture is our CULTURE"